18/11/2020
ನನ್ನ ಕನಸಿನ ಊರು ತೀರ್ಥಹಳ್ಳಿ
'ತೀರ್ಥಹಳ್ಳಿ' ಹೆಸರು ಕೇಳಿದರೇನೇ ತಂಪು ಬೀಸುತ್ತದೆ. ಸುತ್ತಾಡಲೇಬೇಕೆಂಬ ಹಠ ಎದ್ದಾಗ, ಎಲ್ಲಿಗೆ ಹೋಗೋದು ಎಂಬ ಸಂಶಯವಾದಾಗ ತೀರ್ಥಹಳ್ಳಿಗೆ ಬಂದು ಬಿಡುತ್ತೇನೆ. ಕಳೆದ ಬೇಸಿಗೆಯಲ್ಲಿ ಮೂರು ರಾತ್ರಿಗಳನ್ನು ಪರಶು ತೀರ್ಥದ ಬಳಿಯ ರಾಮಮಂಟಪದ ಕೆಳಗೆ ಚುಕ್ಕಿ ಎಣಿಸುತ್ತಾ ಮಲಗಿದ್ದೆ. ಹರಿಯುವ ತುಂಗೆಯಲ್ಲಿ ಉದ್ದಕ್ಕೆ, ಅರ್ಧ ಮುಳುಗುವಂತೆ ಮಲಗಿ ನೀರಿನ ತಂಪು ಹಾಗೂ ಬಿಸಿಲಿನ ಬೇಗೆಯ ಮಿಶ್ರಣದ ಖುಷಿ ಅನುಭವಿಸಿದ್ದೇನೆ. ಈ ಸಲದ ಮಳೆಗೆ ಆ ತೀರ್ಥ ಮಂಟಪ ಮುಳುಗಿದ್ದನ್ನು ಕಂಡು ಬೆರಗುಗೊಂಡಿದ್ದೇನೆ.
ಮುಂಜಾನೆ ಬೇಗ ಸಮೀಪದ ಬೆಟ್ಟವೇರಿ ಸೂರ್ಯೋದಯ ನೋಡಿದ್ದೇನೆ. ತುಂಗಾ ನದಿಯ ತೀರದಲ್ಲಿ ಸಂಗೀತ ಅಭ್ಯಾಸ ಮಾಡುವ ವಾದ್ಯದವರ ಧ್ವನಿಗೆ ಕರಗಿಹೋಗಿದ್ದೇನೆ. ಹಳೆಯ ಕಲ್ಲಿನ ಸೇತುವೆಯ ಮೂಲಕ ದಾಟುವ ಮಲ್ನಾಡ್ ಹುಡುಗಿಯರ ಗೆಜ್ಜೆಯ ಗಲ್ ಗಲ್ಲಿಗೆ ಸೋತಿದ್ದೇನೆ.
ಆದರೆ ತೀರ್ಥಹಳ್ಳಿಯ ನದಿ ದಂಡೆ ಮಾತ್ರ ತೀರಾ ಹೊಲಸು. ಚಂದದ ಊರಿಗೆ ಅದೊಂದು ಕಪ್ಪು ಚುಕ್ಕೆ. ದೂರದ ಗಂಗೆಯ ಶುದ್ದೀಕರಣ ಇನ್ನೂ ಆಗ್ಲೇ ಇಲ್ಲ ಎನ್ನುವ ಸುದ್ದಿಯನ್ನು ತುಂಗೆಯಲ್ಲಿ ಉಚ್ಚೆ ಹೊಯ್ದೇ ಮಾತಾಡುವ ಯುವಕರನ್ನು ಕಂಡಿದ್ದೇನೆ.
ಅದನ್ನು ಹೊರತುಪಡಿಸಿದರೆ ತೀರ್ಥಹಳ್ಳಿ ನನ್ನ ಕನಸಿನ ಊರು.
ಚಿತ್ರ, ಬರಹ: ಮಂಜುನಾಥ್ ಕಾಮತ್
ನನ್ನ ಕನಸಿನ ಊರು ತೀರ್ಥಹಳ್ಳಿ
'ತೀರ್ಥಹಳ್ಳಿ' ಹೆಸರು ಕೇಳಿದರೇನೇ ತಂಪು ಬೀಸುತ್ತದೆ. ಸುತ್ತಾಡಲೇಬೇಕೆಂಬ ಹಠ ಎದ್ದಾಗ, ಎಲ್ಲಿಗೆ ಹೋಗೋದು ಎಂಬ ಸಂಶಯವಾದಾಗ ತೀರ್ಥಹಳ್ಳಿಗೆ ಬಂದು ಬಿಡುತ್ತೇನೆ. ಕಳೆದ ಬೇಸಿಗೆಯಲ್ಲಿ ಮೂರು ರಾತ್ರಿಗಳನ್ನು ಪರಶು ತೀರ್ಥದ ಬಳಿಯ ರಾಮಮಂಟಪದ ಕೆಳಗೆ ಚುಕ್ಕಿ ಎಣಿಸುತ್ತಾ ಮಲಗಿದ್ದೆ. ಹರಿಯುವ ತುಂಗೆಯಲ್ಲಿ ಉದ್ದಕ್ಕೆ, ಅರ್ಧ ಮುಳುಗುವಂತೆ ಮಲಗಿ ನೀರಿನ ತಂಪು ಹಾಗೂ ಬಿಸಿಲಿನ ಬೇಗೆಯ ಮಿಶ್ರಣದ ಖುಷಿ ಅನುಭವಿಸಿದ್ದೇನೆ. ಈ ಸಲದ ಮಳೆಗೆ ಆ ತೀರ್ಥ ಮಂಟಪ ಮುಳುಗಿದ್ದನ್ನು ಕಂಡು ಬೆರಗುಗೊಂಡಿದ್ದೇನೆ.
ಮುಂಜಾನೆ ಬೇಗ ಸಮೀಪದ ಬೆಟ್ಟವೇರಿ ಸೂರ್ಯೋದಯ ನೋಡಿದ್ದೇನೆ. ತುಂಗಾ ನದಿಯ ತೀರದಲ್ಲಿ ಸಂಗೀತ ಅಭ್ಯಾಸ ಮಾಡುವ ವಾದ್ಯದವರ ಧ್ವನಿಗೆ ಕರಗಿಹೋಗಿದ್ದೇನೆ. ಹಳೆಯ ಕಲ್ಲಿನ ಸೇತುವೆಯ ಮೂಲಕ ದಾಟುವ ಮಲ್ನಾಡ್ ಹುಡುಗಿಯರ ಗೆಜ್ಜೆಯ ಗಲ್ ಗಲ್ಲಿಗೆ ಸೋತಿದ್ದೇನೆ.
ಆದರೆ ತೀರ್ಥಹಳ್ಳಿಯ ನದಿ ದಂಡೆ ಮಾತ್ರ ತೀರಾ ಹೊಲಸು. ಚಂದದ ಊರಿಗೆ ಅದೊಂದು ಕಪ್ಪು ಚುಕ್ಕೆ. ದೂರದ ಗಂಗೆಯ ಶುದ್ದೀಕರಣ ಇನ್ನೂ ಆಗ್ಲೇ ಇಲ್ಲ ಎನ್ನುವ ಸುದ್ದಿಯನ್ನು ತುಂಗೆಯಲ್ಲಿ ಉಚ್ಚೆ ಹೊಯ್ದೇ ಮಾತಾಡುವ ಯುವಕರನ್ನು ಕಂಡಿದ್ದೇನೆ.
ಅದನ್ನು ಹೊರತುಪಡಿಸಿದರೆ ತೀರ್ಥಹಳ್ಳಿ ನನ್ನ ಕನಸಿನ ಊರು.
ಚಿತ್ರ, ಬರಹ: ಮಂಜುನಾಥ್ ಕಾಮತ್